ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಅರೆಬಾಸೆ ಪದ್ಯ- 2 ಬಿರಿಂಬಿರಿ ಬಿರಿಂಬಿರಿ ಮೊರ್ಟದೆ ಕಾನದ ಮರಲಿ  ಕೇಳಿಕೆ ಯಾರಿಲ್ಲೆ ಆಟಿನ ಜಡಿಮಳೆ ರೆಂಕೆ ಚೆಂಡ್ಯಾದೆ ಸೂಂಡಿಕೆ ಕೊಡೆ ಇಲ್ಲೆ ನಿಲ್ಲಕ್ಂತೇಳಿರೆ ಎತ್ತ ನೋಡಿರೂ ಕಟ್ಟಿದ ಮನೆ ಇಲ್ಲೆ ಇದ್ದ ಮನೆನ ಜೆನ ಇದರ ಮೀರ್ಸಿ ಒಳೊ ಹೋಕೆನು ಮನ್ಸಿಲ್ಲೆ ಬೂಮಿನು ಹೊತ್ತುನು ತಿರ್ಗಿತ್  ಮೊನ್ಶನ  ತಲೆನು ತಿರ್ಗಿ ಹೋತು ಕಾನದ ಕಾಡೂ ಕಾಡ್ ನ ಮರನೂ ಇಲ್ಲದಾಂಗೆ ಆತ್ ಕಾಡ್ ನ ಮರಂದ  ಊರುನ ಮಾಡ್ ಗೆ  ಬಿರಿಂಬಿರಿ ಬಂದ್ ಬುಡ್ತ್ ಬಿರಿಂಬಿರಿ ಸದ್ದ್ ಗೆ ಕೊತ್ತಿನ ಹಿಂದೆನೆ ನಾಯಿನು ಓಡ್ಯೋತು ಬಾಗ್ ಲ್ ಮುಚ್ಚಿ ಕಿಡಿಕೆ ತೆಗ್ದ ಮನೆ ಸುರುಗೆ ಲಾಯ್ ಕೆ  ಇತ್ತ್ ಮಳೆ ನಿತ್ತೋತು ಮಯ್ಂದ್ ನು ಹೋತು ತಿಂಗನು ಒಂದಾತ್ ದೊಡ್ಡೊವು ಸಣ್ಣೊವು ಗೋಡೆಗು ಬಾಯಿ ಬೊಬ್ಬೆನೆ ಅಲ್ಲಿತ್ತ್  ಮಕ್ಕ ಸಾಲೆಂದ ಮನೆಗೆ ಬಂದದೇ ಬಿರಿಂಬಿರಿ ಓಡ್ಯೋತು ಗುಡ್ಡೆಗೆ ಗುಡ್ಡೆ ಅಡ್ಡ ಇದ್ದದೆಂತ  ಹಿರಿಯರ ಮಾತುಟ್ಟು ಇದ್ದಲ್ಲೆ ಇದ್ದ್ ಬೊದ್ಕಿ ಹೋದರ್ಲಿ ನೋಡಿರೆ ಸುಕ ಉಟ್ಟು                                        ಡಾ. ಕರುಣಾಕರ ನಿಡಿಂಜಿ
ನಾಯಿ ಪಾಡ್ಂತ ನೀವು ಕೇಳಿದ್ದರೆ, ಅದ್ ಮಾತ್ರ ಅಲ್ಲ ಕೊತ್ತಿಪಾಡ್ಂತ ಒಂದು ಉಟ್ಟು, ಇಲ್ಲಿ ಓದಿ ಮೊತ್ತಿ ಮೀನ್ ಕಟ್ಟ್ ಸುತ್ತ ಸುತ್ತಿ ಬಂದ ಕಪ್ಪು ಕೊತ್ತಿ ಅವ್ವನ ಕೈನ ಕತ್ತಿನ ನೋಡಿ ಸುಮ್ಮನೆ ಕುದ್ದತ್ತ್ ಬೀಲ ಕೊಣ್ಸಿ ಮೀಸೆ ಉದ್ದಿ ಕೈನೆಕ್ಕಿ ಮೋರೆ ಪೂಜಿ ಪೂಜಿ ರಾಗಮಾಲೆ ಉರ್ಗಿ ಕರ್ದ್ ಎದ್ದೆದ್ದ್ ಕುದ್ದತ್ತ್ ಒಂದೊ ಎರ್ಡೊ ಮೀನ್ ಕದ್ದ್ ಅಟ್ಟದ ಏಣಿ ಮೂಲೆಲಿ ಕುದ್ದ್ ಕಣ್ಣ್ ಮುಚ್ಚಿ ಬುಟ್ಟ್ ತಿಂಬ ಸುಕದ ನೆಂಪಾತ್ ಕೊತ್ತಿ ಹೀಂಗೆ ಕನ್ಸ್ ಕಂಡ್ ಹಿಂದೆ ಮುಂದೆ ಹೋದು ಕಂಡ್ ಮೂಲೆಲಿ ಕುದ್ದ ಮಾಯ್ಪುನ ಸೂಡಿಗೆ ಮೆಲ್ಲಂಗೆ ನೆಗೆ ಬಾತ್ ಹಿಂದೆ ಎಷ್ಟೋ ಸರ್ತಿ ಹೀಂಗೆ ಕೊತ್ತಿ ಕನ್ಸ್ ಕಂಡ್ ಹಾಂಗೆ ಅಂಡ್ ಬಾಪ್ ಸಿ  ಮಂಡೆ ಕುಟ್ಟಿ ಓಡ್ದ್ ನೆಂಪಾತ್ ಒಳೆಗೆ ಹೋವ ಗಡಿಬಿಡಿ ಕಾಲ್ ನ ಸೆರೆಗೆ ಬಂದ್ ಕೊತ್ತಿ ಸೆಕ್ಕಿ ಕೈನ ಅಳೆಗೆ ನೆಲಕ್ಕೆ ಬಿದ್ದ್ ಮೂರಾರ್ ಚೂರಾತ್ ಮೇಲೆನ ಬೊಬ್ಬೆ ಕೆಳೆಗಿನ ಬೊಬ್ಬೆ ಒಳೆಗೆ ಬೊಬ್ಬೆ ಹೊರೆಗೆನ ಬೊಬ್ಬೆ ಲಟಪಟ ಸದ್ದ್ ಲಿ ಕೊತ್ತಿನ ಬೆನ್ನ್ ಬತ್ತದ ಪೊಡಿಯಾತ್ ಬಿದ್ದ ಮೀನ್ ಬುಟ್ಟ್ ಕೊತ್ತಿ ಎದ್ದ್ ಬಿದ್ದ್ ಓಡುದು ನೋಡಿ ನೀರ್ ನ ಗಡಿಗೆ ಹೊಣ್ಕಿ ನೆಗಾಡಿ ನೆಗಾಡಿ ಬಾಗಾತ್ ಯಾರ್ದೊ ಕೈಲಿ ಇರುವ ಸೊತ್ತ್ ಗೆ ಸುಮ್ಮನೆ ಕನ್ಸ್ ಕಂಡರೆ ಪುಟ್ಟ ಸಿಕ್ಕಿರು ದಕ್ಕದೆ ಹೋದರ್ಂದಾಗಿ ಹೀಂಗೆ ಮಾಡಿಕೆ ಬೊತ್ತ್                 ...
ಆತ್ಮೀಯರೆ,                ಎಲ್ಲರಿಗೂ ನಮಸ್ಕಾರ. ಕೋಲ್ಮಿಂಚು ಎಂಬುದು ಮಳೆಗಾಲ ಕರಿಮುಗಿಲನ್ನು ಒಂದರೆಕ್ಷಣ ಝಗ್ಗನೆ ಬೆಳಗಿಸಿ ಎಲ್ಲವನ್ನೂ ಬೆಳ್ಳಂಬೆಳಕಿನಲ್ಲಿ ದರ್ಶನಮಾಡಿಸಿಬಿಡುವ ನಿಸರ್ಗದ ಬೆಳಕು. ಇದೇನೂ ಬಹುಕಾಲ ಉಳಿಯುವ ಬೆಳಕಲ್ಲ. ಆದರೆ ಅದು ತೋರಿಸಿದ ಸತ್ಯಗಳು ಬಹುಕಾಲ ನೋಡಿದವರ ಮನ:ಪಟಲದಲ್ಲಿ ನಿಂತು ಸರಣಿಯಲ್ಲಿ ಚಿಂತನೆ ಕಲ್ಪನೆ ಕಾಣ್ಕೆಗಳನ್ನು ಕಾಣಿಸುತ್ತ- ಬದುಕುತ್ತಿರುತ್ತವೆ; ಬೆಳೆಯುತ್ತಿರುತ್ತವೆ. ಮನಸ್ಸಿರುವುದರಿಂದ  ಮಾನವರು ಎಂದೆನಿಸಿಕೊಂಡವರು ನಾವು. ಮನುಷ್ಯನ ಮನಸೇ ಒಂದು ಬೆಳಕಿನ ಮೂಲ. ಅದರ ವಿಚಾರ ಸಾಮರ್ಥ್ಯವೇ ಆ ಬೆಳಕು. ಅದು  ಅಪೂರ್ವವಾದುದು. ಈ ಹಿನ್ನೆಲೆಯಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ ಚಿಂತನೆಗಳನ್ನು ಸಮಾನ ಮನಸ್ಕರಲ್ಲಿ ಹಂಚಿ - - ಅವರಿಂದ ಪಡೆದು ಖುಷಿಪಡುವುದು ಈ ಪುಟದ ಉದ್ದೇಶ. ನನ್ನ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ವಿನಯಪೂರ್ವಕ ವಿನಂತಿಸಿಕೊಳ್ಳುತ್ತೇನೆ.                                                                                    ...